- ರಾಕ್ಷಸರರು
ಕವಿ ಗೋಪಾಲಕೃಷ್ಣ ಅಡಿಗರು ಬಹಳ ಹಿಂದೆ ರಕ್ಷಸರರು ಎಂಥ ಒಂದು ಪ್ರಭಂದವನ್ನು ಬರೆದದ್ದು ನನಗೆ ನೆನಪಿದೆ. ರಾಕ್ಷಸರು ಅಂದರೆ ಯಕ್ಷಗಾನದ ಪಾತ್ರಧಾರಿಯಂತೆ ಬಣ್ಣ ಬಣ್ಣದ ವೇಷ ದರಿಸಿರುವುದಿಲ್ಲ. ಅವರು ಎಲ್ಲರಂತೆ ಸಭ್ಯರಂತೆ ಕಾಣುತ್ತಾರೆ .ಮೃದು ಭಾಷಿಗಳಾ ಗಿರುತ್ತಾರೆ . ಆದರ್ಶದ ಮಾತು ಅವರ ತುಟಿಯಲ್ಲಿ ಇರುತ್ತದೆ. ಅವರು ಸ್ನೇಹ ಪ್ರಿಯರು ಆಗಿರಬಹುದು .
ಕ್ರಮೇಣ ಅಧಿಕಾರ ,ಸ್ಥಾನ , ಮಾನ ಸಿಕ್ಕಿದನ್ತೆಲ್ಲ ಯಿವರು ಬದಲಾಗುತ್ತ ಹೋಗುತ್ತಾರೆ . ಇವರ ಜನಪರ ಕಾಳಜಿ ಕಡಿಮೆ ಆಗುತ್ತೆ . ತಾನೊಬ್ಬ ದೊಡ್ಡ ಹೀರೋ ಅಂತ ಭಾವಿಸಲಿಕ್ಕೆ ಸುರು ಮಾಡುತ್ತಾರೆ . ತಾನು ಮುಂದೆ ಬರಲು ಕಾರಣರಾದವರನ್ನ ದೂರ ಇಡಲು ಸುರು ಮಾಡುತ್ತಾರೆ . ಹೊಸ ಸಂಭಂದವನ್ನು ,ಹೊಸ ಚಟಗಳನ್ನು ಪಡೆದುಕೊಳ್ಳುತ್ತಾ ತಮ್ಮನ್ನೇ ತಾವು ಪ್ರೀತಿಸುತ್ತ ನನ್ನನ್ನು ಯಾರು ಕೇಳುವರಿಲ್ಲ ಎಂಬುವಂತೆ ವರ್ತಿಸತೊಡಗುತ್ತಾರೆ . ಅಲ್ಲಿಂದ ಇವರ ಅವಸಾನ
ಶುರುವಾಯಿತೆಂದು ತಿಳಿಯಬೇಕು . ಅರುಣ್ ತೇ ಜಪಾಲ್ ಆಗಿದ್ದು ಇದೇ .ರಾಜಕಾರಣಿ ಗಳೀಗೆ ಸಿಂಹ ಸ್ವಪ್ನ ವಾಗಿದ್ದ ಈತ ತಾನೊಬ್ಬ ಹೀರೋ ಎಂದು ಭಾವಿಸತೊಡಗಿದ . ಹೊಗಳು ಭಟರನ್ನು ತನ್ನ ಸುತ್ತಲು ಬೆಳೆಸಿಕೊಂಡ . ನೈತಿಕ ಅಧ :ಪ ಥ ನದ ದಾರಿ ಹಿಡಿದ . ಈ ಗ ತನ್ನ ಸುತ್ತ ಯಿರುವ ಎಲ್ಲ ಹೊಗಳು ಭಟ್ಟರು ಮಾಯವಾಗುತ್ತಾರೆ . ಆತ ಏಕಾಂಗಿ ಆಗುತ್ತಾನೆ .
ಇವನು ಒಂದು ರಾಕ್ಷಸ ಎಂಬ ಅರಿವು ಮೊದಲೇ ಎಲ್ಲರೀಗೂ ಗೊತ್ತಾಗಿದ್ದರೆ ಈತನ ಅಧ:ಪಥನ ಆಗುತ್ತಿರಲಿಲ್ಲ . ಓಬ್ಬ ಪ್ರಥಿಬಾವಂಥನ ಅವಸಾನ ವಾಗುತ್ತಿರಲಿಲ್ಲ . ನೈತಿಕ ತೆಯನ್ನು ಬೇರೆಯವರಿಂದ ಬಯಸುವವರು ತಾವು ಪರಿಶುದ್ದರಾಗಿರಬೇಕಂಬ ಕನಿಷ್ಟ ಅರಿವು ಈತನಿಗಿಲ್ಲದೆ ಹೋ ಯಿತಲ್ಲ ಎನ್ನುವುದೇ ದುರ್ದೈವ . ಜೀವನದಲ್ಲಿ ಮೇಲೆ ಹೋಗುವುದು ತುಂಬಾ ಕಷ್ಟ . ಕೆಳೆಗೆ ಬೀಳುವುದು ತುಂಬಾ ಸುಲಭ ."
No comments:
Post a Comment