ಪುಸ್ತಕ ಬಿಡುಗಡೆ
ಶ್ರೀ ರಾಘವೇಂದ್ರ ಹತ್ವಾರ್ ಬರೆದ ಇಂಗ್ಲಿಷ್ ಪುಸ್ತಕ ," INDIAN DEEP SPACE NETWORK- MARS NOT TOO FAR " ನ್ನು , ಸೆಪ್ಟೆಂಬರ್ ೨೮ ,೨೦೧೬ ರಂದು , ಭಾರತೀಯ ಬಾಹ್ಯಾಕಾಶ ಸಂಸ್ಥಗೆ ಸೇರಿದ ,ಭಾರತೀಯ ಡೀಪ್ ಸ್ಪೇಸ್ ನೆಟ್ವರ್ಕ್ ,ಕೇಂದ್ರದಲ್ಲಿ , ಆ ಕೇಂದ್ರದ ನಿರ್ದೇಶಕರಾದ ಶ್ರೀ ಆಂಜನೇಯಲು ಅವರು ಬಿಡುಗಡೆ ಮಾಡಿದರು. . ಈ ಸಂದರ್ಭದಲ್ಲಿ ,ಭಾರತೀಯ ಉಪಗ್ರಹ ಸಂಸ್ಥೆಯ ಮಾಜಿ ನಿರ್ದೇಶಕರಾದ ಡಾ . ಶಿವಕುಮಾರ್ ,ಹಾಗೂ ಈ ಸಂಸ್ಥೆಯ ಉಪನಿರ್ದೇಶಕರಾದ ಶ್ರೀ .ವಿ.ವಿ. ಶ್ರೀನಿವಾಸನ್ ಮತ್ತು ಹಲವಾರು ತಂತ್ರಜ್ಞರು ,ಉಪಸ್ಥಿತರಿದ್ದರು .
ಈ ಸಂದರ್ಭದಲ್ಲಿ ಡಾ .ಆಂಜನೇಯಲು ಸ್ವಾಗತ ಭಾಷಣ ಮಾಡಿದರು. ಮುಖ್ಯ ಅಥಿತಿಯಾದ ,ಡಾ . ಶಿವಕುಮಾರ್ ರವರು , ಈ ಪುಸ್ತಕದ ಲೇಖಕರಾದ ಶ್ರೀ ರಾಘವೇಂದ್ರ ಹತ್ವಾರ್ ರವರನ್ನು, ಶಾಲು ಹೊದಿಸಿ ಸನ್ಮಾನಿಸಿದರು . ನಂತರ ," ಇಂಡಿಯನ್ ಡೀಪ್ ಸ್ಪೇಸ್ ನೆಟ್ವರ್ಕ್ -ಮಾರ್ಸ್ ನಾಟ್ ಟೂ ಫ಼ಾರ್" ಎನ್ನುವ ಇಂಗ್ಲಿಷ್ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು
ಈ ಸಂದರ್ಭ ದಲ್ಲಿ ಡಾ ಆಂಜನೇಯುಲು ಮಾತನಾಡುತ್ತ ಭಾರತೀಯ ಗಾಢಾಂತರಿಕ್ಷ ಕೇಂದ್ರ ದ , ಸ್ಥಾಪನೆಯಲ್ಲಿ , ಇಸ್ಟ್ರಾಕ್ ಕೇಂದ್ರದ ,ಪಾತ್ರವನ್ನು ಶ್ಲಾಘಿಸಿದರು . ಡಾ . ಶಿವಕುಮಾರ್ ಮಾತನಾಡಿ , ಭಾರತೀಯ ಗಾಢಾಂತರಿಕ್ಷ ಕೇಂದ್ರದ ನಿರ್ಮಾಣದ ಭಾಗವಹಿಸಿದ ಎಲ್ಲಾ ಸಂಸ್ಧೆಗಳನ್ನು ,ಹಾಗೂ ಇದಕ್ಕಾಗಿ ಹಗಲು ರಾತ್ರಿ ದುಡಿದ ಎಲ್ಲಾ ವ್ಯಕ್ತಿ ಗಳನ್ನು ನೆನಪಿಸಿಕೊಂಡರು. ಅವರು ಲೇಖಕ ಶ್ರೀ ರಾಘವೇಂದ್ರ ಹತ್ವಾರ್ ರವರ ,ಪುಸ್ತಕದಲ್ಲಿ ಈ ಕೇಂದ್ರದ ನಿರ್ಮಾಣದ ಎಲ್ಲಾ ಹಂತದಲ್ಲಿ ಎದುರಿಸಿದ ಸಮಸ್ಯೆ , ಕಂಡುಕೊಂಡ ಪರಿಹಾರ ಎಲ್ಲವನ್ನು ಒಂದು ಕಥೆಯೆ ರೂಪದಲ್ಲಿ ಸಾಮಾನ್ಯರೀಗೂ ಅರ್ಥವಾಗುವ ರೀತಿಯಲ್ಲಿ ಪ್ರಸ್ತುತ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು. ಭಾರತೀಯ ಗಾಢಾಂತರಿಕ್ಷ ಕೇಂದ್ರವು ಚಂದ್ರಯಾನ ಹಾಗೂ ಇತ್ತಿಚೇಗೆ ಕಳುಹಿಸಿದ , ಮಂಗಳಯಾನ ಉಪಗ್ರಹ ಯಶಸ್ವೀ ನಿಯಂತ್ರಣದಲ್ಲಿ ವಹಿಸಿದ ಪಾತ್ರವನ್ನು ಹೊಗಳುತ್ತಾ, ಈ ಯೋಜನೆಯು ಭಾರತೀಯ ಬಾಹ್ಯಾಕಾಶ ಒಂದು ಮೈಲಿ ಗಲ್ಲಾಗಿದೆ ಎಂದು ತಿಳಿಸಿದರು. ಇದು ಭಾರತ ದಲ್ಲೇ ವಿನ್ಯಾಸಗೊಂಡು ಭಾರತೀಯರೇ ನಿರ್ಮಿಸಿ ದ ಒಂದು ವೈಜಾನಿಕ ಕೇಂದ್ರ ವಾಗಿದೆ .ಎಂದು ಹೇಳುತ್ತಾ ಇದು ನಮ್ಮ ಪ್ರಧಾನಿ ಯವರ ಕನಸಿನ ,"ಮೇಡ್ ಇನ್ ಇಂಡಿಯ " ಪರಿಕಲ್ಪನೆಗೆ ಒಂದು ಉತ್ತಮ ಮಾದರಿಯಾಗಿದೆ ಎಂದು ಹೇಳಿದರು. ಓದುಗರು ಈ ಪುಸ್ತಕವನ್ನು ಓದಿ ಪ್ರೋಸ್ಸಾಯಿಸುವರೆಂದು ನಂಬಿರುವುದಾಗಿ ತಿಳಿಸಿದರು
ಡಾ .ಶಿವಕುಮಾರ್ ಈ ಕೇಂದ್ರ ಮಾಜಿ ನಿರ್ದೇಶಕರಾಗಿದ್ದರು ,ಹಾಗೂ ಈ ಕೇಂದ್ರದ ನಿರ್ಮಾಣದಲ್ಲಿ ಅವರು ವಹಿಸಿದ ಪಾತ್ರ ,ಅತ್ಯಂತ ಮಹತ್ತರವಾಗಿದೆ.
ನಂತರ ಲೇಖಕರಾದ , ಶ್ರೀ .ಹತ್ವಾರ್ ,ತಮ್ಮಪುಸ್ತಕದ ಬಗ್ಗೆ ಹಾಗೂ ಈ ಕೇಂದ್ರದ ನಿರ್ಮಾಣ ಹಂತದಲ್ಲಿ ಆದ ಅನುಭವನ್ನು ಮತ್ತು ವಹಿಸಿದ ಎಲ್ಲ ಸಂಸ್ಥೆಗಳು , ವ್ಯಕ್ತಿಗಳ ಪಾತ್ರವನ್ನು ನೆನಪಿಸಿಕೊಂಡರು. ಅವರು , ಈ ಪುಸ್ತಕ ವನ್ನು ಹೊರತರುವಲ್ಲಿ ಸಹಕರಿಸಿದ ಎಲ್ಲರೀಗೂ ತಮ್ಮ ಕೃತಜ್ಞತೆಯನ್ನು ವ್ಯಕ್ತ ಪಡಿಸುತ್ತಾ ,ಹಾಗೂ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದುಕೊಟ್ಟ , ಹಿರಿಯ ವಿಜ್ಞಾನಿ ,ಹಾಗೂ ಭಾರತೀಯ ಭಾಹ್ಯಾಕಾಶ ಸಂಸ್ಥೆ ಮಾಜಿ ಅಧ್ಯಕ್ಷ ,ಡಾ .ಯು .ರಾಮಚಂದ್ರ ರಾವ್ ತಮ್ಮ ಹ್ರತ್ಪೂರ್ವಕ ಅಭಿನಂದನೆಯನ್ನು ಸಲ್ಲಿಸಿದರು .
ನಂತರ ಕೆಲವು ತಂತ್ರಜ್ಞರು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು. . ಶ್ರೀ ಜಯಪ್ರಸಾದ್ ರವರು ವಂದನಾರ್ಪಣೆಯನ್ನು ಸಲ್ಲಿಸಿದರು.
No comments:
Post a Comment